Thursday, December 01, 2011

ಬೆಳಕು ಕಂಡ ಆ ಕ್ಷಣದಲಿ...

ಮಾತು ನಿಂತಿದೆ,
ಮೌನ ಬೇಕಿದೆ,
ಮನಸ್ಸು ಬರಿದಾಗಿದೆ...
ದಾರಿ ಕಾಣದಾಗಿದೆ...

ಎಣ್ಣೆಯೂ ಮುಗಿದಿದೆ,
ದೀಪವೂ ಆರಿದೆ,
ಕತ್ತಲೆಯೇ ಸುತ್ತಲೂ...
ಬೆಳಕೇ ಕಾಣದಿರಲು...

ನಿಜದಿ ಅಂಧಕಾರವೋ,
ದಿಟ್ಟಿಯೇ ಕಳೆದಿದೆಯೋ,
ನೆರಳೂ ಜೊತೆಗಿಲ್ಲ...
ಸಂಗಾತಿಯ ಸುಳಿವಿಲ್ಲ...

ಕದವು ತೆರೆದೀತೆ...
ಹಣತೆ ಹೊತ್ತೀತೆ...
ಬದುಕಿದರೆ ಬಂದೇನು...
ಬರೆದಾರೆ ಬರೆದೇನು...
ಬೆಳಕು ಕಂಡ ಆ ಕ್ಷಣದಲಿ...

8 comments:

Guruprasad . Sringeri said...

ಭಾವನೆ ಚೆನ್ನಾಗಿ ಮೂಡಿಬಂದಿದೆ...

ಸುಷ್ಮಾ ಮೂಡುಬಿದಿರೆ said...

ತಾಳ್ಮೆ ಕಾಯುವಿಕೆಗೆ ಪ್ರತಿಫಲ ಸಿಕ್ಕೆ ಸಿಗುತ್ತದೆ..
ನಿರೀಕ್ಷೆ ಸಫಲವಾಗುತ್ತದೆ..
ಚಂದದ ಕವನ

rashmi said...

artha poornavagide..

ಬಸವರಾಜ ಗೌಡನಬಾವಿ said...

ಅಂಧಕಾರದೊಳಗಿನ ಆತಂಕಕ್ಕೆ ಭಾವನೆಯ ಬಣ್ಣವನ್ನು ತುಂಬಲಾಗಿದೆ, ಬೆಳಕು ಕಂಡ ಆ ಕ್ಷಣದಲ್ಲಿ. ಮೌನದ ಸಂಗಾತಿಗಾಗಿ ಬದುಕಿನ ನೀರಿಕ್ಷೆಯ ಭಾವನೆ ಚೆನ್ನಾಗಿ ಮೂಡಿಬಂದಿದೆ.

SpoorthyMurali said...

hey, chennagide..moorane stanza tumba chennagide...!

@spn3187 ಕನ್ನಡಿಗ ಶಿವಕುಮಾರ ನೇಗಿಮನಿ said...

® ನೋಡಿ ತುಂಬಾ ಸಂತೋಷವಾಯಿತು.
visit my site

http://spn3187.blogspot.in/

Also say Your Friends
Find me

Unknown said...

ವಾವಾ ಬ್ರೋ ತುಂಬಾ ಚೆನ್ನಾಗಿದೆ

Unknown said...

ಮಂಕುತಿಮ್ಮನ ಕಗ್ಗ ದ ಸಾರಾಂಶ ಸಿಗುತ್ತಾ ತಿಳಿಸಿ. ನನಗೆ ಕನ್ನಡ ಬರೋಲ್ಲ.