tag:blogger.com,1999:blog-19622633.post8071050007219436401..comments2023-09-28T19:04:37.440+05:30Comments on ....ನನ್ನಾಲೋಚನೆಗಳು....: ಯತ್ರ ನಾರ್ಯಸ್ತು ಪೂಜ್ಯಂತೆ....ವಿನುತhttp://www.blogger.com/profile/14007075797874906269noreply@blogger.comBlogger10125tag:blogger.com,1999:blog-19622633.post-63554201661432903462009-02-23T22:52:00.000+05:302009-02-23T22:52:00.000+05:30ಸಹಮತಕ್ಕೆ ಧನ್ಯವಾದಗಳು ರವಿಯವರೇ...ಸಹಮತಕ್ಕೆ ಧನ್ಯವಾದಗಳು ರವಿಯವರೇ...ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-44554991029428608642009-02-23T17:26:00.000+05:302009-02-23T17:26:00.000+05:30ಬಹಳ ಒಳ್ಳೆಯ ವಿಚಾರಧಾರೆಯನ್ನು ಮೂಡಿಸಿದ್ದೀರಿ... ಧನ್ಯವಾದಗ...ಬಹಳ ಒಳ್ಳೆಯ ವಿಚಾರಧಾರೆಯನ್ನು ಮೂಡಿಸಿದ್ದೀರಿ... ಧನ್ಯವಾದಗಳು. ಎಲ್ಲರೂ ಇಂತಹ ಚಿಂತನೆಯಲ್ಲಿ ತೊಡಗಿ, ಆಗಬೇಕಿರುವ ಸಾಮಾಜಿಕ ಮಾರ್ಪಾಡುಗಳೆಡೆಗೆ ಹೆಜ್ಜೆಯನ್ನಿಡಬೇಕಿದೆ.<BR/><BR/>- ರವಿraviharahttps://www.blogger.com/profile/05015633906214428486noreply@blogger.comtag:blogger.com,1999:blog-19622633.post-85922244325017723062009-02-12T06:53:00.000+05:302009-02-12T06:53:00.000+05:30ಸುನಿಲ್, ರಾಜೀವ್,ಧನ್ಯವಾದಗಳು.ಚಿಂತನಾರ್ಹ ಪ್ರಶ್ನೆಯೊಂದನ್ನ...ಸುನಿಲ್, ರಾಜೀವ್,<BR/><BR/>ಧನ್ಯವಾದಗಳು.<BR/><BR/>ಚಿಂತನಾರ್ಹ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದೀರಿ. ಗಂಡ-ಹೆಂಡತಿಯರ ನಡುವಿನ, ಸಹುದ್ಯೋಗಿಗಳೊಡನೆ, ಅಕ್ಕ-ತಂಗಿಯರೊಡನೆ, ಅಣ್ಣ-ತಮ್ಮಂದಿರೊಡಗಿನ ನಮ್ಮ ನಡವಳಿಕೆಗಳು, ಆಲೋಚನೆಗಳನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ, ಕೊರತೆಯನ್ನು ತುಂಬಿಕೊಂಡರೆ, ಬದಲಾವಣೆ ನಮ್ಮಿಂದಲೇ ಶುರುವಾಗಬಹುದೆಂದುಕೊಳ್ಳುತ್ತೇನೆ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-36779884799507327412009-02-11T03:43:00.000+05:302009-02-11T03:43:00.000+05:30ಸಂವಿಧಾನವನ್ನು ಎತ್ತಿ ಹಿಡಿಯಬೇಕಾದದ್ದು ಹೇಗೆ ದೇಶದ ಜನರ ಕರ...ಸಂವಿಧಾನವನ್ನು ಎತ್ತಿ ಹಿಡಿಯಬೇಕಾದದ್ದು ಹೇಗೆ ದೇಶದ ಜನರ ಕರ್ತವ್ಯವೋ, ಹಾಗೆಯೇ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೂ ಅಷ್ಟೇ ದೊಡ್ಡ ಜವಾಬ್ದಾರಿ. ಸಂವಿಧಾನ ನಮಗೆ ಕೇವಲ ಹಕ್ಕುಗಳನ್ನು ನೀಡಿಲ್ಲ. ಕರ್ತವ್ಯಗಳನ್ನೂ ನೀಡಿದೆ. ಸಾಮಾಜಿಕ ಜವಾಬ್ದಾರಿಗಳನ್ನು ವಹಿಸಿದೆ. ಇಂತದೊಂದು significance ಅರಿಯಲು ಅಮೆರಿಕನ್ ಸ್ನೇಹಿತರ ಅವಶ್ಯಕತೆಯಿಲ್ಲ. ಅರಿತುಕೊಳ್ಳುವ ಮನಸ್ಸಿಲ್ಲದ ನೀವು, ಯಾರ ಸಹಾಯದಿಂದಲೂ ಅರಿಯಲಾರಿರಿ. ಮಲಗಿರುವವರನ್ನು ಎಬ್ಬಿಸಬಹುದು. ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಅಸಾಧ್ಯ.<BR/><BR/>ನಾನು ಹಗುರವಾಗಿ ಮಾತನಾಡಿದ್ದು, ಇತರರಿಗಾಗಿ ಶ್ರಮಿಸುವ ನಿಜವಾದ ಕಾರ್ಯಕರ್ತರ ಬಗ್ಗೆಯಲ್ಲ. ಯಾಕೆಂದರೆ ಅವರ ಪರಿಶ್ರಮ, ಅವರನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿದೆ. ಗಂಡಸರು ಕುಡಿಯುತ್ತಾರೆಂದು ನಾವೂ ಕುಡಿಯುತ್ತೇವೆಂದು ಹೊರಟಿರುವ, ಬೇಜವಬ್ದಾರಿ ಹೇಳಿಕೆಗಳನ್ನು ಕೊಡುತ್ತಿರುವ, ಕೇವಲ ಶ್ರೀಮಂತರಿಗೆ ಅನ್ಯಾಯವಾಗಿದೆಯೆಂದೆನಿಸಿದಾಗ ಮಾತ್ರ ಆರ್ಭಟಿಸಿ, ಮಹಿಳಾ ಸ್ವಾತಂತ್ರ್ಯವನ್ನು ಪಬ್, ಬಾರ್ ಗಳತ್ತ ಕೊಂಡೊಯ್ಯುತಿರುವ ಬೂಟಾಟಿಕೆ ಕಾರ್ಯಕರ್ತರ ಬಗ್ಗೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ ಅವಶ್ಯಕತೆಯೇನಿದೆ?<BR/><BR/>ಪಬ್ ಗಳಿಗೆ ಹೋಗುವುದು ಆಧುನಿಕತೆ, ಸ್ವಾತಂತ್ರ್ಯ ಎಂಬ ಭ್ರಮೆಯಲ್ಲಿ, ಅಮೂಲ್ಯವಾದ ದುಡ್ಡಿನ ಹಾಗೂ ಸಮಯದ ಪರಿವೆಯಿಲ್ಲದೆ, ಪ್ರಜ್ಞೆಕಳೆದುಕೊಳ್ಳುವವರ ಬಗ್ಗೆ ನನ್ನ ಕಲ್ಪನೆ ಬಾಲಿಶವಾಗಿದ್ದಲ್ಲಿ, ಹಾಗೆಯೇ ಸರಿ. ಆದರೆ ವಾಸ್ತವಿಕತೆ ನಿಮ್ಮಷ್ಟು ಬಾಲಿಶವಾಗಿಲ್ಲ. ಒಮ್ಮೆ ಆ ಪಬ್ ಬಾರ್ ಗಳಿಂದ ಹೊರಬಂದು, ಬ್ರಿಗೇಡ್ ರಸ್ತೆ, ಎ೦.ಜಿ ರಸ್ತೆಗಳಿಂದಾಚೆ ಬಂದು ಜಗತ್ತನ್ನು ನೋಡಿ. ಕಲ್ಪನೆಗೂ ವಾಸ್ತವಿಕತೆಗೂ ವ್ಯತ್ಯಾಸ ತಿಳಿಯುತ್ತದೆ. ಕೇವಲ ವಿರೋಧಿಸುವುದಕ್ಕಾಗಿಯೇ ವಿರೋಧಿಸಬೇಡಿ.<BR/><BR/>ರೇಣುಕಾ ಚೌಧರಿ ನಿಮ್ಮ ನಾಯಕಿಯಾಗಿರಬಹುದು. ಪಬ್ ಭರೋ ನಿಮ್ಮ ಚಳುವಳಿಯಾಗಿರಬಹುದು. ಆದರೆ ರಾಮಸೇನೆಗೂ, ನನಗೂ ಯಾವ ಸಂಬಂಧವಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ವೈಯಕ್ತಿಕ ಆರೋಪಗಳನ್ನು ಮಾಡುವಾಗ ಇರಬೇಕಾದ ಸಭ್ಯತೆಯನ್ನರಿಯಿರಿ.<BR/><BR/>ಒಂದು ನಿರ್ದಿಷ್ಟ ಗುರಿಯಿಲ್ಲದ, ಉದ್ದೇಶರಹಿತ, ಅವಶ್ಯಕತೆಯಿಲ್ಲದ ಹೋರಾಟಗಳನ್ನೇ ತಡೆಯಲು ಸಾಧ್ಯವಾಗದಿರುವಾಗ, ಉತ್ತಮ ಉದ್ದೇಶಗಳ, ಆರೋಗ್ಯಕರ ಸಮಾಜ ನಿರ್ಮಾಣದ ಹೋರಾಟವನ್ನು ಯಾರೂ ತಡೆಯಲು ಸಾಧ್ಯವಿಲ್ಲ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-21600012896829177642009-02-10T19:24:00.000+05:302009-02-10T19:24:00.000+05:30"ನಾನೆಲ್ಲೂ ಹೊಡೆದು ಬಡೆದು ಪಾಠ ಕಲಿಸುವ ಬಗ್ಗೆ ಪ್ರಸ್ತಾಪಿಸ..."ನಾನೆಲ್ಲೂ ಹೊಡೆದು ಬಡೆದು ಪಾಠ ಕಲಿಸುವ ಬಗ್ಗೆ ಪ್ರಸ್ತಾಪಿಸಿಲ್ಲ, ಸಮರ್ಥಿಸಿಲ್ಲ. ಬದಲಾಗಿ ಪ್ರಶ್ನಿಸಿದ್ದೇನೆ"<BR/><BR/>ಇಲ್ಲ, ಸಮರ್ಥಿಸಿಲ್ಲ. ಆದರೆ ನೀವು ಪ್ರಶ್ನಿಸಿರುವುದು ಸಂಸ್ಕೃತಿಯ ಆಧಾರದ ಮೇಲೆ. ಅಲ್ಲಿದ್ದ ಹುಡುಗಿಯರ ಸಂವಿಧಾನಾತ್ಮಕ ಹಕ್ಕುಗಳ ಆಧಾರದ ಮೇಲಲ್ಲ. ಸಂಸ್ಕೃತಿ ಬಗ್ಗೆ ಎಲ್ಲರಿಗೂ ಅವರದೇ ಆದ ನಂಬಿಕೆ ಕಲ್ಪನೆಗಳಿರುತ್ತವೆ. ಅದರ ಆಧಾರದ ಮೇಲೆ ಕೆಲವರ ಪ್ರಕಾರ ನೀವು ಹೊರಗೆ ಕೆಲಸ ಮಾಡುವುದೂ ತಪ್ಪಾಗುತ್ತದೆ. ಹಾಗೆಂದು ನೀವು ಮನೆಯಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೀರ? ಸಂವಿಧಾನ ಸಂಸ್ಕೃತಿಯಂತಲ್ಲ, ಅದು ನಿರ್ದಿಷ್ಟವಾದ ಬರಹದ ರೂಪದಲ್ಲಿದೆ. ಅದನ್ನು ಓದಿ, ಅದನ್ನು ಎತ್ತಿ ಹಿಡಿಯಬೇಕಾದದ್ದು ದೇಶದ ಜನರೆಲ್ಲರ ಕರ್ತವ್ಯ. ಭಾರತದ ಸಂವಿಧಾನದ ಪ್ರಕಾರ ಹುಡುಗಿಯರು ಪಬ್ ಗೆ ಹೋಗುವುದು ತಪ್ಪಲ್ಲ. ಹುಡುಗಿಯರನ್ನು ಪಬ್ ಗೆ ಹೋಗುವುದರಿಂದ ಬಲಾತ್ಕಾರವಾಗಿ ತಡೆಯುವುದು ತಪ್ಪು. ನಿಮ್ಮ ಅಮೆರಿಕನ್ ಸ್ನೇಹಿತರನ್ನು ಕೇಳಿ ಸಂವಿಧಾನದ significance ಏನೆಂದು ಅರ್ಥ ಮಾಡಿಕೊಳ್ಳಿ.<BR/><BR/><BR/>"ನಾನಿಂದು ಇಲ್ಲಿಗೆ ಬರಲು, ಆ ಸ್ತ್ರೀ ಸ್ವಾತಂತ್ರ್ಯದ ಹೋರಾಟವನ್ನೇ ಮಾಡಿ ಬಂದಿರುವುದು."<BR/><BR/>ಇರಬಹುದು, ಆದರೆ ಹೋರಾಟವನ್ನು ನೀವು ಮುಂದುವರಿಸಿಲ್ಲ. ನೀವು ಹಗುರವಾಗಿ ಮಾತಾಡುವ ಮಹಿಳಾ ಸಂಘದ ಕಾರ್ಯಕರ್ತರು ಜೀವನವಿಡೀ ಇತರ ಮಹಿಳೆಯರಿಗಾಗಿ ದುಡಿಯುತ್ತಾರೆ.<BR/><BR/><BR/> "ಆದರೆ ನನ್ನ ಹೋರಾಟ ನಿಮ್ಮ ಹಾಗೆ ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಕಡೆಗಿರಲಿಲ್ಲವಷ್ಟೆ."<BR/><BR/>ಪಬ್ ಗಳಿಗೆ ಹೋಗುವುದೇ ಹೋರಾಟವಲ್ಲ. ಪಬ್ ಗೆ ಹೋಗುವ ಜನ ಅಲ್ಲಿಗೆ ಹೋಗಲು ಕಾರಣ ಅಲ್ಲಿಗೆ ಹೋಗಲು ಅವರಿಗೆ ಇಷ್ಟ, ಅಷ್ಟೇ. ನಿಮ್ಮನ್ನು ಯಾರೂ ಪಬ್ಬಿಗೆ ಹೋಗಿ ಎಂದು ಹೇಳುತ್ತಿಲ್ಲ. ಹಾಗೆಯೇ ಪಬ್ಬಿಗೆ ಹೋಗುವವರ ತಂಟೆ ನೀವು ನಿಮ್ಮ ರಾಮಸೇನೆಯವರು ಹೋಗಬೇಕಾಗಿಲ್ಲ.<BR/><BR/><BR/><BR/>"ಕೇವಲ high class society ಗಳ ಹೆಣ್ಣುಮಕ್ಕಳ ಪರ ಹೋರಾಟವನ್ನು ಮೀಸಲಿಟ್ಟಿರುವ ನಿಮ್ಮಂತವರಿಂದ ನಾನು, ಮಹಿಳಾ ಕಾರ್ಯಕರ್ತರ ಪರಿಶ್ರಮಗಳ ಬಗ್ಗೆ, ಸೇವೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ."<BR/><BR/>ಅಗತ್ಯ ಇದೆ. ಯಾಕೆಂದರೆ, ಪಬ್ಬಿಗೆ ಹೋಗುವವರು high society ಎಂಬುದು ನಿಮ್ಮ ತಪ್ಪು ಕಲ್ಪನೆ. ಇಷ್ಟಾಗಿಯೂ high society ಯ ಹೆಂಗಸರ ಪರವಾಗಿ ಹೋರಾಡುವುದರಲ್ಲಿ ತಪ್ಪೇನಿದೆ? ಇವತ್ತು ಪಬ್ ದಾಳಿಯ ವಿರುದ್ಧ ಹೋರಾಡುತ್ತಿರುವ ಮಹಿಳೆಯರು, ಮಹಿಳಾ ಸಂಘಗಳು ಹಾಗು ಹಲವಾರು ಗಂಡಸರು high society ಗೆ ಸೇರಿಲ್ಲದ ಹೆಂಗಸರ ಪರವಾಗಿಯೂ ಹೋರಾಡಿದ್ದಾರೆ.<BR/><BR/><BR/>"ಗಂಡಸರು ಮಾಡುವ ಕೆಲಸವನ್ನು ಮಾಡುವುದೇ ಸಮಾನತೆ ಎಂದು ಹೇಳಿ, ಅದಕ್ಕಿರುವ ಅರ್ಥವನ್ನೂ ಹಾಳುಮಾಡಿ, ಕರ್ತವ್ಯಗಳ ಅರಿವಿಲ್ಲದೇ ಹಕ್ಕುಗಳ ಬಗ್ಗೆ ಮಾತನಾಡುವ ನೀವು ಮೊದಲು ಮಹಿಳಾ ಸ್ವಾತಂತ್ರ್ಯದ ಆಯಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ."<BR/><BR/>ಇನ್ನೊಂದು ಬಾಲಿಶವಾದ ಕಲ್ಪನೆ! ಪಬ್ಬಿಗೆ ಹೋಗುವ ಹುಡುಗಿಯರು ಅಲ್ಲಿಗೆ ಹೋಗುವುದು ಗಂಡಸರೊಂದಿಗೆ ಸಮಾನತೆಯನ್ನು ಸಾಧಿಸಲಿಕ್ಕಲ್ಲ! ಪಬ್ಬಿಗೆ ಹೋಗಲು ಅವರಿಗಿಷ್ಟ ಅದಕ್ಕೆ! "ಬಾಯ್ ಫ್ರೆಂಡ್ಸ್" ಗಳನ್ನು ನಂಬಿಕೊಂಡು ಪಬ್ ಗೆ ಹೋಗುವುದಿಲ್ಲ, ಅವರಾಗಿಯೇ, ಅವರ ಆಯ್ಕೆಯಂತೆ ಹೋಗುತ್ತಾರೆ.<BR/><BR/><BR/>"ನಾನು ಹೇಳಹೊರಟಿದ್ದೇನೆಂದರೆ, ಮಂಗಳೂರಿನ ಘಟನೆ ಆಗಿ ಹೋಗಿದೆ."<BR/><BR/>ಇಲ್ಲ, ಆಗಿಹೋಗಿಲ್ಲ. ಮತ್ತೆ ಮತ್ತೆ ನಡೆಯುವ ಸಾಧ್ಯತೆ ಇದೆ. ಈ ಸಾಧ್ಯತೆಯನ್ನು ತಡೆಯಲೆಂದೇ ಹೋರಾಟಗಳನ್ನು ನಡೆಸುತ್ತಿರುವುದು.<BR/><BR/><BR/>"ಅಂತೆಯೇ ಇನ್ನೂ ಗಂಭೀರವಾದ, ಕೀಳುಮಟ್ಟದ ಘಟನೆಗಳೂ ನಡೆದಿವೆ. ಆದರೆ ಮಂಗಳೂರಿನ ವಿಷಯದಲ್ಲಿ ತೋರಿಸಿದ ಆಸಕ್ತಿ, ಕಳಕಳಿ, ಸಾಮಾಜಿಕ ಜವಾಬ್ದಾರಿ, ನೈತಿಕತೆ, ಮಿಕ್ಕ ಎಷ್ಟು ಘಟನೆಗಳಿಗೆ ಸಿಕ್ಕಿದೆ? ಸಿಗುವ ಸಂಭವವಿದೆ?"<BR/><BR/>ಇನ್ನೂ ಗಂಭೀರವಾದ ಘಟನೆಗಳು ನಡೆದಿವೆ ಎಂದ ಮಾತ್ರಕ್ಕೆ ಈ ಘಟನೆಯನ್ನು ಸಣ್ಣ ವಿಷಯವೆಂದು ಮರೆತುಬಿಡಲು ಸಾಧ್ಯವಿಲ್ಲ. ಬೇರೆ ಘಟನೆಗಳ ಬಗ್ಗೆ ಜನರ ಗಮನ ಸೆಳೆದು, ಹೋರಾಡುವುದರಿಂದ ನಿಮ್ಮನ್ನು ಯಾರೂ ತಡೆಯುತ್ತಿಲ್ಲ.Anonymousnoreply@blogger.comtag:blogger.com,1999:blog-19622633.post-35482588234356173582009-02-10T11:30:00.000+05:302009-02-10T11:30:00.000+05:30ಅನಾಮಿಕರೇ,ಪ್ರತಿಯೊಂದು ವಿದ್ಯಮಾನವೂ ನಾವು ನೋಡುವ ದೃಷ್ಟಿಕೋ...ಅನಾಮಿಕರೇ,<BR/><BR/>ಪ್ರತಿಯೊಂದು ವಿದ್ಯಮಾನವೂ ನಾವು ನೋಡುವ ದೃಷ್ಟಿಕೋನದ ರೂಪವನ್ನು ಪಡೆದುಕೊಳ್ಳುತ್ತದೆ. ನಾವು ಮಾಡುವ ಎಲ್ಲ ಕಾರ್ಯಗಳಿಗೂ ಒಂದು ಕಾರಣವಿರುತ್ತದೆ. ಕಳ್ಳನಿಗೂ, ಕುಡುಕನಿಗೂ, ಕೊಲೆಗಡುಕನಿಗೂ, ಸೈನಿಕನಿಗೂ, ಭಯೋತ್ಪಾದಕನಿಗೂ, ಸ್ವಾಮಿಗೂ, ಸಾಧ್ವಿಗೂ, ವೇಶ್ಯೆಗೂ ಎಲ್ಲರಿಗೂ ಅವರದೇ ಕಾರಣಗಳಿರುತ್ತವೆ. ಎಲ್ಲರೂ ಅವರ ಮೂಗಿನ ನೇರಕ್ಕೆ ಅವರೇ ಸರಿ. ಆದರೆ ಒಂದು ಆರೋಗ್ಯಕರ ಸಮಾಜದ ಪರಿಧಿಯಲ್ಲಿ ಸರಿ/ತಪ್ಪುಗಳನ್ನು ವಿಶ್ಲೇಷಿಸಿದಾಗ ಘಟನೆಯ ಹಲವು ಮಜಲುಗಳು ಕಾಣಿಸಬಹುದು. ಹಾಗೆ ನನಗೆ ಈ ಘಟನೆಯಲ್ಲಿ ಕಂಡುಬಂದ ಮಜಲುಗಳ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದೀನೆಯಷ್ಟೆ.<BR/><BR/>ಇದು ಮಹಿಳಾ ಸ್ವಾತಂತ್ರ್ಯವನ್ನು, ಹಕ್ಕನ್ನು ಪ್ರಶ್ನಿಸುವ ಸಂದರ್ಭ ಅಲ್ಲವೆಂದು ಹೇಗೆ ಹೇಳುತ್ತೀರಿ? <BR/>-"ಈ ಎಲ್ಲ ಘಟನೆಗಳು ಏನನ್ನು ಸಾಧಿಸಿದವೋ ಗೊತ್ತಿಲ್ಲ, ಆದರೆ ಮಾಧ್ಯಮಗಳ ನೈತಿಕತೆ, ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಂತೂ ನಿಜ" ಎಂದು ಮೊದಲಿಗೇ ಹೇಳಿದ್ದೇನೆ - ಇವು ಸ್ತ್ರೀ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ ಎಂದು<BR/><BR/>ಅದನ್ನು ಹೊಡೆದು ಬಡಿದು "ಪಾಠ ಕಲಿಸಲು" ಯಾರಿಗೂ ಹಕ್ಕಿಲ್ಲ.<BR/>-ನಾನೆಲ್ಲೂ ಹೊಡೆದು ಬಡೆದು ಪಾಠ ಕಲಿಸುವ ಬಗ್ಗೆ ಪ್ರಸ್ತಾಪಿಸಿಲ್ಲ, ಸಮರ್ಥಿಸಿಲ್ಲ. ಬದಲಾಗಿ ಪ್ರಶ್ನಿಸಿದ್ದೇನೆ - "ಸಂಸ್ಕೃತಿಯ ಸಂರಕ್ಷಕರೆಂಬ ಪಡೆಯೊಂದು ಹಾಡು ಹಗಲಿನಲ್ಲೇ ಯುವತಿಯರ ಮೇಲೆ ಹಲ್ಲೆ ನಡೆಸಿತಲ್ಲಾ, ಇದು ಸಂಸ್ಕೃತಿಯೇ?... ಇನ್ನಾದರೂ ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಅನೀತಿಗೊಳಿಸುವ ಕಾರ್ಯಗಳು ನಿಲ್ಲಲಿ. ಗುಂಪೊಂದರ ಉದ್ದೇಶ ಮಾತ್ರ ಸರಿಯಿದ್ದರೆ ಸಾಲದು. ಅದನ್ನು ಕಾರ್ಯಗತಗೊಳಿಸುವ ಮಾರ್ಗವೂ ಸರಿಯಿರಬೇಕು."<BR/><BR/>ನೀವೇನು ಮಾಡುತ್ತಿದ್ದಿರಿ? ಅಮೇರಿಕಾದಲ್ಲಿ ಕುಳಿತು ನಿಮ್ಮ ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದಿರಾ? ಈ ಹೇಯವಾದ ಕೃತ್ಯವನ್ನು ಪ್ರತಿಭಟಿಸುವುದು ಕೇವಲ ಮಹಿಳೆಯರ ಕರ್ತವ್ಯವೇ? ಗಂಡಸರನ್ನೇಕೆ ನೀವು ಪ್ರಶ್ನಿಸುತ್ತಿಲ್ಲ?<BR/>- ಒಂದು ಘಟನೆ ನಡೆಯುವಾಗ, ಅದನ್ನು ವಿರೋಧಿಸುವವರು ಅಥವಾ ಸರಿಯಾದ ಪ್ರಜ್ಞೆಯುಳ್ಳವರು ಆ ಸ್ಥಳದಲ್ಲಿ ಇದ್ದರೆ, ಆ ದುರ್ಘಟನೆ ಸಂಭವಿಸುವುದೇ ಇಲ್ಲ. ನಾನು ಹೇಳಹೊರಟಿದ್ದೇನೆಂದರೆ, ಮಂಗಳೂರಿನ ಘಟನೆ ಆಗಿ ಹೋಗಿದೆ. ಅಂತೆಯೇ ಇನ್ನೂ ಗಂಭೀರವಾದ, ಕೀಳುಮಟ್ಟದ ಘಟನೆಗಳೂ ನಡೆದಿವೆ. ಆದರೆ ಮಂಗಳೂರಿನ ವಿಷಯದಲ್ಲಿ ತೋರಿಸಿದ ಆಸಕ್ತಿ, ಕಳಕಳಿ, ಸಾಮಾಜಿಕ ಜವಾಬ್ದಾರಿ, ನೈತಿಕತೆ, ಮಿಕ್ಕ ಎಷ್ಟು ಘಟನೆಗಳಿಗೆ ಸಿಕ್ಕಿದೆ? ಸಿಗುವ ಸಂಭವವಿದೆ? <BR/>- ಯುವತಿಯರ ಮೇಲಾದ ದೌರ್ಜನ್ಯವನ್ನು ಮಾತ್ರ ಪ್ರಶ್ನಿಸಿ, ಆ ಮೂಲಕ ಪಬ್ ಗೆ ಹೋಗಿ ಸ್ವಾತಂತ್ರ್ಯ ಪ್ರದರ್ಶನ ಮಾಡುವುದಕ್ಕೆ ಮಹಿಳಾ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೀಸಲಿಟ್ಟ ಕಾರ್ಯಕರ್ತೆಯರೆನಿಸಿಕೊಂಡವರಿಗೆ ಆ ಪ್ರಶ್ನೆ. <BR/><BR/>ಅವರೇನು ಹೇಳಬೇಕಾಗಿತ್ತು? ಪುಂಡರಿಗೆ ಹೆದರಿಕೊಂಡು ಮನೆಯಲ್ಲಿ ಕಂಬಳಿ ಹೊದ್ದು ಮಲಗಿ ಎಂದು ಹೇಳಬೇಕಾಗಿತ್ತೆ? ಇಲ್ಲಾ ಅಮೆರಿಕಕ್ಕೆ ವಲಸೆ ಹೋಗಿ ಎಂದು ಹೇಳಬೇಕಾಗಿತ್ತೆ?<BR/>- ಏನೂ ಹೇಳದಿದ್ದರೂ ನಡೆಯುತ್ತಿತ್ತು. ಹೆಣ್ಣು ಮಕ್ಕಳ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಕ್ಕೂ, ಯುವ ಜನತೆಯನ್ನು ಪಬ್ ಬಾರ್ ಗಳಿಗೆ ಹೋಗಿ ಕುಡಿದು ಕುಣಿಯಿರಿ ಎಂದು ಹೇಳುವುದಕ್ಕೂ ವ್ಯತ್ಯಾಸ ಗುರುತಿಸಲಾಗದ ನಿಮಗೆ, ಸ್ವಾತಂತ್ರ್ಯದ ಕಲ್ಪನೆಯೇ ಸರಿಯಾಗಿ ತಿಳಿದಂತಿಲ್ಲ.<BR/><BR/>ಈ ಪ್ರಶ್ನೆಯನ್ನು ನೀವು ಬಾಯ್ ಫ್ರೆಂಡ್ಸ್ ಗಳನ್ನು ಕೇಳಬೇಕಲ್ಲವೆ? ಕೇವಲ ಯುವತಿಯರನ್ನು ಯಾಕೆ ಕೇಳುತ್ತೀರಿ?<BR/>- ಮತ್ತೊಮ್ಮೆ ವಾಕ್ಯವನ್ನು ಪೂರ್ಣವಾಗಿ ಓದಿ ’ನೀವು ನಂಬಿಕೊಂಡು ಬಂದಿದ್ದ ’ - ಆದ್ದರಿಂದ ಯುವತಿಯರನ್ನಷ್ಟೇ ಕೇಳಿದ್ದು. ಕುಂಬಳಕಾಯಿಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರೇಕೆ?<BR/><BR/>ನೀವೇ ನಿಮ್ಮ ಬರಹದಲ್ಲಿ ಇನ್ನೊಂದು ಕಡೆ ಹೆಂಗಸರ ದೈಹಿಕ ಸಾಮರ್ಥ್ಯದ ಬಗ್ಗೆ ಹೇಳಿದ್ದೀರ. ಆದರೂ ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ದ್ವೇಷದ ಕಾರಣದಿಂದ ಎಷ್ಟು ಅಸಡ್ಡೆ-ತುಂಬಿದ ಹಾಗೂ ಅಸಂಬದ್ಧವಾದ ಮಾತುಗಳನ್ನು ಬರೆದಿದ್ದೀರ!! <BR/>- "ದೈಹಿಕ ಸಾಮರ್ಥ್ಯದಲ್ಲಿ ನಿಮಗಿಂತ ಸ್ವಲ್ಪ ಕೆಳಸ್ತರದಲ್ಲಿದ್ದಾಳೆ", ಸ್ವಲ್ಪ ಕೆಳಸ್ತರವೆಂದಿದ್ದೇನೆಯೇ ಹೊರತು, ನಿಶ್ಯಕ್ತೆ ಎಂದು ಹೇಳಿಲ್ಲ. ನಾ ನೋಡಿದ ವೀಡಿಯೋದಲ್ಲಿ ಒಬ್ಬಳನ್ನು ಒಬ್ಬ ಹೊಡೆಯುತ್ತಿದ್ದ. ಮಿಕ್ಕವರೆಲ್ಲರೂ, (ಚಿತ್ರೀಕರಿಸುತ್ತಿದ್ದವನನ್ನೂ ಸೇರಿಸಿ) ನೋಡುತ್ತಿದ್ದರು. ಆಕೆ ಹೊಡೆಸಿಕೊಳ್ಳುತ್ತಿದ್ದಳು. ತಿರುಗಿ ಹೊಡೆಯಲಾರದಷ್ಟು ಅಶಕ್ತಳಾಗಿರಲಿಲ್ಲವೆಂದು ನನ್ನ ಅನಿಸಿಕೆಯಾಗಿತ್ತಷ್ಟೆ. <BR/><BR/>ನಿಮ್ಮ ಎಲ್ಲ ಮಾತುಗಳಲ್ಲೂ ನಾನು ಭಾರತದಲ್ಲಿಲ್ಲ ಎಂಬ ಕುಹಕವೇ ಕಾಣುತ್ತದೆ. ಅದನ್ನು ನಾನು ಹೇಗೂ ಅರ್ಥೈಸಬಹುದು. ನಿಮಗೆ ಬರಲಾಗಲಿಲ್ಲವೆಂಬ ಹೊಟ್ಟೆಯುರಿಯೆಂದೋ, ಅಥವಾ ನೀವೇ great ಎನ್ನುವ ನಿಮ್ಮ Ego. ಆದರೆ ಅದರಗತ್ಯ ನನಗಿಲ್ಲ. ಮೊದಲು ಒಬ್ಬ ವ್ಯಕ್ತಿಯ ಆಲೋಚನೆಗಳಿಗೆ ದೇಶ, ಭಾಷೆಯ ಮಿತಿಯನ್ನು ಹಾಕುವ ಈ ನಿಮ್ಮ ಸಂಕುಚಿತ ಮನೋಭಾವನೆಯಿಂದ ಹೊರಬನ್ನಿ. <BR/><BR/>ನಾನಿಂದು ಇಲ್ಲಿಗೆ ಬರಲು, ಆ ಸ್ತ್ರೀ ಸ್ವಾತಂತ್ರ್ಯದ ಹೋರಾಟವನ್ನೇ ಮಾಡಿ ಬಂದಿರುವುದು. ಆದರೆ ನನ್ನ ಹೋರಾಟ ನಿಮ್ಮ ಹಾಗೆ ಪಬ್ ಗಳಿಗೆ ಹೋಗಿ ಕುಡಿದು ಕುಣಿಯುವುದರ ಕಡೆಗಿರಲಿಲ್ಲವಷ್ಟೆ. ಕೇವಲ high class society ಗಳ ಹೆಣ್ಣುಮಕ್ಕಳ ಪರ ಹೋರಾಟವನ್ನು ಮೀಸಲಿಟ್ಟಿರುವ ನಿಮ್ಮಂತವರಿಂದ ನಾನು, ಮಹಿಳಾ ಕಾರ್ಯಕರ್ತರ ಪರಿಶ್ರಮಗಳ ಬಗ್ಗೆ, ಸೇವೆಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ. ಹಳ್ಳಿಯಿಂದ ನಗರದವರೆಗಿನ ನನ್ನ ಜೀವನದಲ್ಲಿ, ನೋಡಿದ್ದೇನೆ, ಕಲಿತಿದ್ದೇನೆ. ಗಂಡಸರು ಮಾಡುವ ಕೆಲಸವನ್ನು ಮಾಡುವುದೇ ಸಮಾನತೆ ಎಂದು ಹೇಳಿ, ಅದಕ್ಕಿರುವ ಅರ್ಥವನ್ನೂ ಹಾಳುಮಾಡಿ, ಕರ್ತವ್ಯಗಳ ಅರಿವಿಲ್ಲದೇ ಹಕ್ಕುಗಳ ಬಗ್ಗೆ ಮಾತನಾಡುವ ನೀವು ಮೊದಲು ಮಹಿಳಾ ಸ್ವಾತಂತ್ರ್ಯದ ಆಯಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ನಿಜವಾದ ಅರ್ಥದಲ್ಲಿ ಹೋಮ್ ವರ್ಕ್ ಮಾಡಿ.<BR/><BR/>ಸತ್ಯಾಸತ್ಯತೆಯನ್ನು ಅರಿವ ಪ್ರಯತ್ನವನ್ನೂ ಮಾಡದೆ, ಒಬ್ಬ ವ್ಯಕ್ತಿಯ ಬಗ್ಗೆ, ಆಲೋಚನೆಗಳ ಬಗ್ಗೆ, ಮಹಿಳಾ ಸ್ವಾತಂತ್ರ್ಯದ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವ ನಿಮ್ಮಂತಹ ಅನಾಮಧೇಯರಿಂದ ನಿಜವಾಗಿ ತಲುಪಬೇಕಾದ ಮಹಿಳೆಯರಿಗೆ ತಲುಪುವ ಸ್ವಾತಂತ್ರ್ಯ ಅಷ್ಟರಲ್ಲೇ ಇದೆ. ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳದೆ ಅದನ್ನು ಸಂರಕ್ಷಿಸುತ್ತೇನೆಂಬುದು, ಸ್ವಾತಂತ್ರ್ಯದ ಬೆಲೆ ತಿಳಿಯದೆ ಅದನ್ನು ಎಲ್ಲೆಡೆಯೂ ಬಳಸುವುದು, ಕರ್ತವ್ಯ ನಿರ್ವಹಿಸದೆ ಹಕ್ಕುಗಳಿಗಾಗಿ ಹೋರಾಡುವುದು ಹಾಸ್ಯಾಸ್ಪದ, ತಿಳಿಗೇಡಿತನ ಹಾಗೂ ಬೇಜವಾಬ್ದಾರಿತನ. ನಿಮ್ಮಂತವರ ಅವಶ್ಯಕತೆಯೂ ಭಾರತಕ್ಕಿಲ್ಲ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-19622633.post-68471310621241970042009-02-10T10:47:00.000+05:302009-02-10T10:47:00.000+05:30Read this and participatehttp://thepinkchaddicampa...Read this and participate<BR/><BR/>http://thepinkchaddicampaign.blogspot.com/Anonymousnoreply@blogger.comtag:blogger.com,1999:blog-19622633.post-592192468348716182009-02-10T08:54:00.000+05:302009-02-10T08:54:00.000+05:30ವಿನುತಾ,ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ಅಭಿಪ್ರಾಯಗಳು...ವಿನುತಾ,<BR/><BR/>ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ಅಭಿಪ್ರಾಯಗಳು ನನಗೆ ಸರಿಕಾಣಲಿಲ್ಲ. ನಿಮ್ಮಂತಹದೇ ಅಭಿಪ್ರಾಯ ಅನೇಕ ಹೆಂಗಸರೂ (ಆಶ್ಚರ್ಯದ ವಿಷಯ), ಗಂಡಸರೂ (ಆಶ್ಚರ್ಯದ ವಿಷಯವಲ್ಲ!) ಬರೆಯುತ್ತಿದ್ದಾರೆ. ನನ್ನ ತಕರಾರಿರುವುದು ನಿಮ್ಮ ಈ ಮಾತುಗಳ ಬಗ್ಗೆ:<BR/><BR/><BR/>"ಮಂಗಳೂರಿನ ಪಬ್ ವೊಂದರಲ್ಲಿ ಯುವತಿಯೊಬ್ಬಳನ್ನು ಹೊಡೆದಾಕ್ಷಣ, .....ಅವರೂ, ಅವರ ಮಕ್ಕಳೂ ನಡೆಸಿಕೊಳ್ಳುವ ರೀತಿ/ಅನೀತಿಗಳನ್ನು ಪ್ರಶ್ನಿಸುವವರು ಯಾರು? <BR/><BR/>ಮೊದಲನೆಯದಾಗಿ ನೀವು ನಡೆದಿರುವ ಪ್ರಕರಣವನ್ನು ತೀರಾ ಸಣ್ಣದು ಮಾಡಿ ಮಾತಾಡುತ್ತಿದ್ದೀರ. ಒಬ್ಬಳು ಯುವತಿಯನ್ನು ಹೊಡೆಯಲಿಲ್ಲ, ಬದಲಾಗಿ, ಮೊದಲೇ ಮಾಧ್ಯಮಗಳಿಗೆ ಅಲ್ಲಿಗೆ ಬರುವಂತೆ ಆಹ್ವಾನವಿತ್ತು, ಆಮೇಲೆ ಒಂದು ಹುಂಬರ ದಂಡು ಹೋಗಿ, ತಮ್ಮ ಪಾಡಿಗೆ ತಾವು, ತಮ್ಮ ದುಡ್ಡನ್ನು ಖರ್ಚು ಮಾಡಿಕೊಂಡು, ತಮ್ಮ ಸಮಯವನ್ನು ವ್ಯಯಿಸುತ್ತಾ, ಬೇರೆಯವರಿಗೆ ಯಾವ ತೊಂದರೆಯನ್ನೂ ಮಾಡದೇ ಇದ್ದ ಹೆಣ್ಣು ಮಕ್ಕಳ ಮೇಲೆ ಅನಾಗರಿಕವಾಗಿ, ಅಸಂವಿಧಾನಾತ್ಮಕವಾಗಿ ದಾಳಿ ಮಾಡಿದ್ದಾರೆ. ಆ ಹುಂಬರ ಗುರಿ ಅಲ್ಲಿದ್ದ ಗಂಡಸರಾಗಿರಲಿಲ್ಲ, ಬದಲಾಗಿ ಅಲ್ಲಿದ್ದ ಹೆಣ್ಣು ಮಕ್ಕಳಾಗಿದ್ದರು. ಇದು ಮಹಿಳಾ ಸ್ವಾತಂತ್ರ್ಯವನ್ನು, ಹಕ್ಕನ್ನು ಪ್ರಶ್ನಿಸುವ ಸಂದರ್ಭ ಅಲ್ಲವೆಂದು ಹೇಗೆ ಹೇಳುತ್ತೀರಿ? <BR/><BR/>ಎರಡನೆಯದಾಗಿ, ಕೆಲಸದ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿಯನ್ನು ಪ್ರಶಿಸಿದ್ದೀರಿ. ಇದಕ್ಕೂ ಪಬ್ ಪ್ರಕರಣಕ್ಕೂ ಯಾವ ಸಂಬಂಧ? ಯಾರೂ ಕೆಲಸದ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿಯನ್ನು ಪ್ರಶ್ನಿಸುತ್ತಿಲ್ಲ ಎಂಬ ನಿಮ್ಮ ಮಾತಿಗೆ ಆಧಾರವೇನು? ಪಬ್ ನಲ್ಲಿ ದಾಳಿ ನಡೆದಾಗ ಆ ಘಟನೆಯನ್ನು ಕುರಿತು ಚರ್ಚೆ ಮಾಡದೆ ಇನ್ಯಾವುದೋ ಘಟನೆಯನ್ನು ಕುರಿತು ಚರ್ಚೆ ಮಾಡುವಷ್ಟು ನಮ್ಮ ಮಾಧ್ಯಮಗಳಿನ್ನೂ ಕೆಟ್ಟಿಲ್ಲ.<BR/><BR/><BR/>"ನಾವು ಅವರಿಗೇನು ಕಮ್ಮಿ? ನಾವೂ ಮಾಡುತ್ತೇವೆ ಎಂದು ಬೊಬ್ಬಿಡುತ್ತಿದ್ದಾರೆ. ಇದು ಸಮಾನತೆ, ಹಕ್ಕು ಮತ್ತು ಸಂಸ್ಕ್ರತಿ!!!"<BR/><BR/>ನೀವು ಹೇಳುತ್ತಿರುವ ಇದೇ ಮಾತುಗಳನ್ನು ಹೆಂಗಸರು ಕೆಲಸಕ್ಕೆ ಹೋಗುವ ವಿಷಯ ಬಂದಾಗ ಗಂಡಸರೂ ಹೆಂಗಸರೂ ಹೇಳುತ್ತಿದ್ದರು. ಸರಿಯಾಗಿ ಅರ್ಥ ಮಾಡಿಕೊಳ್ಳಿ: ಹದಿನೆಂಟು ಮೀರಿದ ಹೆಣ್ಣಾಗಲೀ ಗಂಡಾಗಲೀ ನೀವು ಪಟ್ಟಿ ಮಾಡಿರುವ "ಅತ್ಯಾಚಾರ"ಗಳನ್ನು ಮಾಡುತ್ತಿದ್ದರೆ, ಅದನ್ನು ಹೊಡೆದು ಬಡಿದು "ಪಾಠ ಕಲಿಸಲು" ಯಾರಿಗೂ ಹಕ್ಕಿಲ್ಲ.<BR/><BR/><BR/>"ಮೊನ್ನೆ ತಾನೇ ಜೈಪುರದಲ್ಲಿ ೧೮ ತಿಂಗಳ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ನಡೆಯಿತು. ಕೇಳಲೂ ಅಸಹ್ಯ ಹುಟ್ಟಿಸುವಂತಹ ಸುದ್ದಿ. ಎಲ್ಲಿ ಹೋಗಿದ್ದರು ಮಹಿಳಾವಾದದ ಕಾರ್ಯಕರ್ತರು? ಬಹುಶ: ಪಬ್ ನಲ್ಲಿ ಕುಳಿತು ತಮ್ಮ ಸಮಾನತೆ, ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದರೆಂದು ತೋರುತ್ತದೆ."<BR/><BR/>ನೀವೇನು ಮಾಡುತ್ತಿದ್ದಿರಿ? ಅಮೇರಿಕಾದಲ್ಲಿ ಕುಳಿತು ನಿಮ್ಮ ಸ್ವಾತಂತ್ರ್ಯದ ಪ್ರದರ್ಶನ ಮಾಡುತ್ತಿದ್ದಿರಾ? ಈ ಹೇಯವಾದ ಕೃತ್ಯವನ್ನು ಪ್ರತಿಭಟಿಸುವುದು ಕೇವಲ ಮಹಿಳೆಯರ ಕರ್ತವ್ಯವೇ? ಗಂಡಸರನ್ನೇಕೆ ನೀವು ಪ್ರಶ್ನಿಸುತ್ತಿಲ್ಲ?<BR/><BR/><BR/>"ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ 'ಪಬ್ ಭರೋ' ಎಂದು ಕರೆಯಿತ್ತಿದ್ದಾರೆ. ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಆಡುವ ನುಡಿಗಳೇ ಇವು?"<BR/><BR/>ಅವರೇನು ಹೇಳಬೇಕಾಗಿತ್ತು? ಪುಂಡರಿಗೆ ಹೆದರಿಕೊಂಡು ಮನೆಯಲ್ಲಿ ಕಂಬಳಿ ಹೊದ್ದು ಮಲಗಿ ಎಂದು ಹೇಳಬೇಕಾಗಿತ್ತೆ? ಇಲ್ಲಾ ಅಮೆರಿಕಕ್ಕೆ ವಲಸೆ ಹೋಗಿ ಎಂದು ಹೇಳಬೇಕಾಗಿತ್ತೆ?<BR/><BR/><BR/>"ಯುವತಿಯರೇ ನಿಮ್ಮನ್ನು ಹೊಡೆಯುವಾಗ ನೀವು ನಂಬಿಕೊಂಡು ಬಂದಿದ್ದ ನಿಮ್ಮ 'ಬಾಯ್' ಫ್ರೆಂಡ್ಸ್ ಎಲ್ಲಿ ಹೋಗಿದ್ದರು? ತಪ್ಪಿಸುವ ಪ್ರಯತ್ನವನ್ನೂ ಮಾಡಲಾಗುತ್ತಿರಲಿಲ್ಲವೇ?"<BR/><BR/>ಈ ಪ್ರಶ್ನೆಯನ್ನು ನೀವು ಬಾಯ್ ಫ್ರೆಂಡ್ಸ್ ಗಳನ್ನು ಕೇಳಬೇಕಲ್ಲವೆ? ಕೇವಲ ಯುವತಿಯರನ್ನು ಯಾಕೆ ಕೇಳುತ್ತೀರಿ?<BR/><BR/><BR/>"ಯಾರೋ ಮೂರನೆಯ ವ್ಯಕ್ತಿ ಹೊಡೆಯುತಿರುವಾಗ ಎಲ್ಲಿ ಹೋಗಿತ್ತು ನಿಮ್ಮ ಆವೇಶ? ತಿರುಗಿ ಬಾರಿಸಬಾರದಾಗಿತ್ತೆ? ಎಲ್ಲಿ ಹೋಗಿತ್ತು ಸಮಾನತೆ? ಹಾಗೆ ಮಾಡಿದ್ದಲ್ಲಿ, ಅದೂ ಕೂಡ ಮಾಧ್ಯಮೀಕರಣವಾಗಿ, ನಿಮ್ಮ ಮಹಿಳಾ ಸ್ವಾತಂತ್ರ್ಯದ ಚಳುವಳಿಗೆ ಹೊಸ ಆಯಾಮವೊಂದು ಸಿಗುತ್ತಿರಲಿಲ್ಲವೇ? ನಿಮ್ಮ ರಕ್ಷಣೆ ನಿಮ್ಮ ಹೊಣೆ, ಬೇರೆಯವರನ್ನೇಕೆ ಆಧರಿಸಿರುವಿರಿ?"<BR/><BR/>ನೀವೇ ನಿಮ್ಮ ಬರಹದಲ್ಲಿ ಇನ್ನೊಂದು ಕಡೆ ಹೆಂಗಸರ ದೈಹಿಕ ಸಾಮರ್ಥ್ಯದ ಬಗ್ಗೆ ಹೇಳಿದ್ದೀರ. ಆದರೂ ನಿಮ್ಮ ಮಹಿಳಾ ಸ್ವಾತಂತ್ರ್ಯದ ಬಗೆಗಿನ ದ್ವೇಷದ ಕಾರಣದಿಂದ ಎಷ್ಟು ಅಸಡ್ಡೆ-ತುಂಬಿದ ಹಾಗೂ ಅಸಂಬದ್ಧವಾದ ಮಾತುಗಳನ್ನು ಬರೆದಿದ್ದೀರ!! <BR/><BR/>ನಿಮ್ಮ ಮಾತುಗಳು ದಂತಗೋಪುರದ ಮೇಲೆ ಕುಳಿತು ಬರೆದಿರುವ ಅರೆಬೆಂದ ಅಭಿಪ್ರಾಯಗಳು! ನೀವು ಮಾಡಬೇಕಾದ ಹೋಮ್ ವರ್ಕ್ ತುಂಬಾ ಇದೆ. ಮೊದಲು ಮಹಿಳಾ ಸ್ವಾತಂತ್ರ್ಯದ ಆಯಾಮಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ. ಮಹಿಳಾ ಕಾರ್ಯಕರ್ತರ ಪರಿಶ್ರಮಗಳ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳಿ. ಯಾವುದಾದರೂ ಸಂಘಟನೆಯನ್ನು ಸೇರಿ ಸೇವೆ ಮಾಡಿ, ಮಾಡುವ ಇಚ್ಛೆ ಇಲ್ಲದಿದ್ದರೆ ಇದರ ಬಗ್ಗೆ ಬರೆಯುವುದನ್ನು ನಿಲ್ಲಿಸಿ. ನಿಮ್ಮ ಬರಹವನ್ನು ನೀವೇ ಓದಿ, ಅದರಲ್ಲಿ ಇರುವ contradictions ನಿವಾರಿಸಿ ಆಮೇಲೆ ಪೋಸ್ಟ್ ಮಾಡಿ.<BR/><BR/>ಕೊನೆಯದಾಗಿ, ನೀವು ಅಮೇರಿಕಾವನ್ನು ಬಿಟ್ಟು ಭಾರತಕ್ಕೆ ಎಂದಿಗೂ ಬರಬೇಡಿ. ಮನೆಯಲ್ಲಿ ಬೆಚ್ಚಗೆ ಕುಳಿತು ಬೇರೆಯವರು ಏನು ಮಾಡಬೇಕೆಂದು ಮಾತ್ರ ಹೇಳುವ ನಿಮ್ಮಂಥವರ ಅವಶ್ಯಕತೆ ಭಾರತಕ್ಕಿಲ್ಲ.Anonymousnoreply@blogger.comtag:blogger.com,1999:blog-19622633.post-66608811658499265672009-02-10T03:44:00.000+05:302009-02-10T03:44:00.000+05:30ವಿನುತಜಿ, ಚೆನ್ನಾಗಿದೆ ಮೂಡಿ ಬಂದಿದೆ ನಿಮ್ಮ ಚಿಂತನೆ... ಗಂ...ವಿನುತಜಿ, <BR/><BR/>ಚೆನ್ನಾಗಿದೆ ಮೂಡಿ ಬಂದಿದೆ ನಿಮ್ಮ ಚಿಂತನೆ... <BR/>ಗಂಡು ಹೆಣ್ಣಿನ ಸಮಾನತೆಯನ್ನು ಸಮಾಜದಲ್ಲಿ ಹೇಗೆ ಕಾಪಾಡುವುದು ಎಂಬ ಪ್ರಶ್ನೆ ಉದ್ಭವಾಗುತ್ತೆ... ಸಮಯವಿದ್ದರೆ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ... We need solutions and people who can implement them; not just opinions.<BR/><BR/>ರಾಜೀವ್Anonymousnoreply@blogger.comtag:blogger.com,1999:blog-19622633.post-70454782816760342622009-02-09T18:35:00.000+05:302009-02-09T18:35:00.000+05:30ವಿನುತ ಅವರೇ,ನಿಮ್ಮ ಲೇಖನವೂ ಸಮಯೋಚಿತವಾಗಿಯೂ, ಅರ್ಥಯುತವೂ ಆ...ವಿನುತ ಅವರೇ,<BR/>ನಿಮ್ಮ ಲೇಖನವೂ ಸಮಯೋಚಿತವಾಗಿಯೂ, ಅರ್ಥಯುತವೂ ಆಗಿದೆ. ಆದರೆ ಏನು ಮಾಡೋದು ರೀ, ನಮ್ಮ ಸಂಸ್ಕೃತಿ, ಸಮಾಜ ಎಲ್ಲವು ಪಾಶ್ಚಿಮಾತ್ಯ ಮಯವಾಗಿ ಬಿಟ್ಟಿದೆ..<BR/>ನಿಜಕೂ ನಿಮ್ಮ ಲೇಖನ ತುಂಬಾ ವಿಚಾರವುಳ್ಳದ್ದಾಗಿದೆ.<BR/>ಸುನಿಲ್ ಮಲ್ಲೇನಹಳ್ಳಿAnonymoushttps://www.blogger.com/profile/08400588927460670150noreply@blogger.com